ನಾಲ್ಕನೇ ಆರ್ಯ ಸತ್ಯ: ನಿಜವಾದ ಮಾರ್ಗ

ನಿಜವಾದ ದುಃಖದ ನಿಜವಾದ ಕಾರಣಗಳ ನಿಜವಾದ ನಿಲುಗಡೆಯನ್ನು ಸಾಧಿಸುವ ನಿಜವಾದ ಮಾರ್ಗವು ಶೂನ್ಯತೆಯ ಪರಿಕಲ್ಪನಾರಹಿತ ಅರಿವಾಗಿರುತ್ತದೆ. ಶೂನ್ಯತೆ ಎಂದರೆ ನಾವು, ಇತರರು ಮತ್ತು ಎಲ್ಲಾ ವಿದ್ಯಮಾನಗಳು ಹೇಗೆ ಅಸ್ತಿತ್ವದಲ್ಲಿವೆ ಎಂಬುದರ ಬಗ್ಗೆ ನಾವು ನಿಜವೆಂದು ತಪ್ಪಾಗಿ ಊಹಿಸುವ ಯಾವುದೇ ವಿಷಯಕ್ಕೆ ಅನುಗುಣವಾಗಿರುವ ವಿಷಯದ ಸಂಪೂರ್ಣ ಅನುಪಸ್ಥಿತಿಯಾಗಿರುತ್ತದೆ. ಶೂನ್ಯತೆಯ ಪರಿಕಲ್ಪನಾರಹಿತ ಅರಿವು ನಿಜವಾದ ಮಾರ್ಗ ಮನಸ್ಸಾಗಿರುತ್ತದೆ, ಅಂದರೆ ಅದು ನಿಜವಾದ ನಿಲುಗಡೆಗೆ ಕಾರಣವಾಗುವ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ.

ಮೊದಲ ಮೂರು ಆರ್ಯ ಸತ್ಯಗಳು 

ನಾವೆಲ್ಲರೂ ಎದುರಿಸುವ ನಿಜವಾದ ದುಃಖವೆಂದರೆ ನಾವು ಅಸಂತೋಷ ಮತ್ತು ಅತೃಪ್ತಿಕರ ಸಂತೋಷದ ಏರಿಳಿತಗಳನ್ನು ಅನುಭವಿಸುವುದನ್ನು ಶಾಶ್ವತಗೊಳಿಸುತ್ತೇವೆ, ಜೊತೆಗೆ ನಾವು ಅವುಗಳನ್ನು ಅನುಭವಿಸುವ ಸೀಮಿತ ದೇಹಗಳು ಮತ್ತು ಮನಸ್ಸುಗಳನ್ನು ಪದೇ ಪದೇ ಹೊಂದಿರುತ್ತೇವೆ ಎಂದು ಬುದ್ಧ ಕಲಿಸಿದರು. ಅದಕ್ಕೆ ನಿಜವಾದ ಕಾರಣಗಳು ನಾವು ಮತ್ತು ಈ ಭಾವನೆಗಳು ಹೇಗೆ ಅಸ್ತಿತ್ವದಲ್ಲಿವೆ ಎಂಬುದರ ಬಗ್ಗೆ ನಮ್ಮ ಅರಿವಿಲ್ಲದಿರುವುದಾಗಿರುತ್ತದೆ (ಅಜ್ಞಾನ). ಅವು ಅಸಾಧ್ಯವಾದ ರೀತಿಯಲ್ಲಿ ಅಸ್ತಿತ್ವದಲ್ಲಿವೆ ಎಂದು ನಾವು ಪ್ರಕ್ಷೇಪಿಸುತ್ತೇವೆ - ಉದಾಹರಣೆಗೆ, ಸ್ವಯಂಪೂರ್ಣವಾದ ಕಾಂಕ್ರೀಟ್ ಘಟಕಗಳಂತೆ - ಮತ್ತು ಅವು ನಮಗೆ ಕಾಣಿಸಿಕೊಳ್ಳುವ ಈ ವಂಚನೀಯ ರೀತಿಯು ಅವು ನಿಜವಾಗಿ ಹೇಗೆ ಅಸ್ತಿತ್ವದಲ್ಲಿವೆ ಎಂಬುದಕ್ಕೆ ಅನುಗುಣವಾಗಿದೆ ಎಂದು ನಂಬುತ್ತೇವೆ. ಈ ತಪ್ಪು ಕಲ್ಪನೆಯು ಗೊಂದಲಮಯ ಭಾವನೆಗಳನ್ನು ಪ್ರಚೋದಿಸುತ್ತದೆ, ಇದು ನಾವು ನಮ್ಮ "ಸ್ವಯಂ" ಎಂದು ಊಹಿಸಿಕೊಳ್ಳುವುದನ್ನು ಪ್ರತಿಪಾದಿಸಲು ಅಥವಾ ರಕ್ಷಿಸಲು ಬಲವಾದ ಕರ್ಮದ ಪ್ರಚೋದನೆಗಳನ್ನು ಉತ್ತೇಜಿಸುತ್ತವೆ, ಆದರೆ ಅವು ಕೇವಲ ಭ್ರಮೆಗಳಾಗಿರುತ್ತವೆ. ಈ ತಪ್ಪು ಕಲ್ಪನೆಯು, ನಮ್ಮ ಸಾವಿನ ಸಮಯದಲ್ಲಿ, ಸೀಮಿತ ದೇಹ ಮತ್ತು ಸೀಮಿತ ಮನಸ್ಸಿನೊಂದಿಗೆ, ಅನಿಯಂತ್ರಿತವಾದ ಪುನರಾವರ್ತಿತ ಪುನರ್ಜನ್ಮವನ್ನು (ಸಂಸಾರ) ಪ್ರಚೋದಿಸುತ್ತದೆ. 

ಆದರೆ, ಈ ನಿಜವಾದ ಕಾರಣಗಳನ್ನು ಮತ್ತು ಆ ಮೂಲಕ ಈ ನಿಜವಾದ ದುಃಖಗಳನ್ನು, ಅವು ಎಂದಿಗೂ ಉದ್ಭವಿಸದಂತೆ ನಿವಾರಿಸಲು ಸಾಧ್ಯವಿದೆ ಎಂದು ಬುದ್ಧ ಅರಿತುಕೊಂಡರು. ನಾಲ್ಕನೇ ಆರ್ಯ ಸತ್ಯವು ಅಂತಹ ನಿಜವಾದ ನಿಲುಗಡೆಯನ್ನು ಕರೆತರುವ ನಿಜವಾದ ಪ್ರತಿವಿಷದ ವಿಷಯಕ್ಕೆ ಸಂಬಂಧಿಸಿದೆ. 

ಸರಿಯಾದ ತಿಳುವಳಿಕೆಯು ಅಜ್ಞಾನವನ್ನು ಶಾಶ್ವತವಾಗಿ ನಿವಾರಿಸುವ ನಿಜವಾದ ಮಾರ್ಗವಾಗಿದೆ 

ಸಾಮಾನ್ಯವಾಗಿ, ನಾವು ಅಸಂತೋ‍ಷ, ಅತೃಪ್ತಿಕರ ಸಂತೋಷ ಅಥವಾ ಶೂನ್ಯತೆಯ ಭಾವನೆಯನ್ನು ಅನುಭವಿಸಿದಾಗ, ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ಊಹಿಸಿ ನಾವು ಅದನ್ನು ಅಸಾಮಾನ್ಯ ಮತ್ತು ನಿಶ್ಚಿತವೆಂದು ಪರಿಗಣಿಸುತ್ತೇವೆ. ಆದರೆ, ನಾವು ಅನುಭವಿಸುವ ಯಾವುದೇ ಭಾವನೆಗಳಲ್ಲಿ ವಿಶೇಷವಾದದ್ದೇನೂ ಇಲ್ಲ - ಅವೆಲ್ಲವೂ ಸ್ಥಿರವಲ್ಲ ಮತ್ತು ಅಶಾಶ್ವತ. ಅವು ಇರುವವರೆಗೂ, ನಿರಂತರವಾಗಿ ತೀವ್ರತೆಯಲ್ಲಿ ಬದಲಾಗುತ್ತಿರುತ್ತವೆ ಮತ್ತು ಅಂತಿಮವಾಗಿ ಅವೆಲ್ಲವೂ ಸ್ವಾಭಾವಿಕವಾಗಿ ಕೊನೆಗೊಳ್ಳುತ್ತವೆ. ಆ ಸತ್ಯದ ಅರಿವಿಲ್ಲದೆ ಮತ್ತು ಅದರ ವಿರುದ್ಧವಾಗಿ ಯೋಚಿಸಿ, ನಮ್ಮ ತಲೆಯಲ್ಲಿನ ಆ ಧ್ವನಿಯು ಜೋರಾಗಿ ಕೂಗುವುದರಿಂದ ನಾವು ವಂಚಿತರಾಗುತ್ತೇವೆ, "ನಾನು ಈ ಸಂತೋಷದಿಂದ ಎಂದಿಗೂ ಬೇರ್ಪಡಬಾರದು; ಇದು ಬಹಳಾ ಅದ್ಭುತವಾದದ್ದು" ಅಥವಾ "ನಾನು ಈ ಅಸಂತೋಷದಿಂದ ಬೇರ್ಪಡಬೇಕೆಂದು ಬಯಸುತ್ತೇನೆ; ಇದು ಬಹಳಾ ಭಯಾನಕವಾಗಿದೆ, ನಾನು ಇದನ್ನು ಸಹಿಸಲಾರೆ" ಅಥವಾ "ಯಾವುದರ ಬಗ್ಗೆಯೂ ಇಲ್ಲದ ಈ ಭಾವನೆ ಎಂದಿಗೂ ಕಡಿಮೆಯಾಗಬಾರದು ಎಂದು ನಾನು ಬಯಸುತ್ತೇನೆ; ಇದು ಬಹಳಾ ಆಹ್ಲಾದಕರವಾಗಿದೆ." "ನಾನು" ಎಂಬುದರ ಮೇಲಿನ ಈ ಸ್ಥಿರೀಕರಣ ಮತ್ತು "ನಾನು" ಎಂಬುದರ ಹಣದುಬ್ಬರವು ಗೊಂದಲಮಯ ಭಾವನೆಗಳು ಮತ್ತು ಪ್ರಚೋದಿತ ನಡವಳಿಕೆಯನ್ನು ಪ್ರಚೋದಿಸುತ್ತದೆ, ಇದು ನಮ್ಮ ನಿಜವಾದ ದುಃಖವನ್ನು ಶಾಶ್ವತಗೊಳಿಸುತ್ತದೆ. 

ನಿಮ್ಮನ್ನೇ ಕೇಳಿಕೊಳ್ಳಿ, ನೀವು "ನಾನು" ಎಂದು ಕರೆಯಲ್ಪಡುವ ಒಂದು ಸ್ಥಿರವಾದ ಅಸ್ತಿತ್ವವಾಗಿ, ಅದು ಸ್ವಯಂಪೂರ್ಣವಾಗಿದೆ, ದೇಹ ಮತ್ತು ಮನಸ್ಸಿನಿಂದ ಸ್ವತಂತ್ರವಾಗಿದೆ ಮತ್ತು ನಿಮ್ಮ ತಲೆಯಲ್ಲಿ ಧ್ವನಿಯ ಲೇಖಕನಾಗಿ ಅಸ್ತಿತ್ವದಲ್ಲಿದೆ ಎಂದು ಏಕೆ ಭಾವಿಸುತ್ತೀರಿ? "ಅದು ಹಾಗೆ ಅನಿಸುತ್ತದೆ ಆದ್ದರಿಂದ ನಾನು ಹಾಗೆ ಭಾವಿಸುತ್ತೇನೆ" ಎಂದು ನೀವು ಹೇಳಿದರೆ, "ನಾನು ಹಾಗೆ ಭಾವಿಸುತ್ತೇನೆ" ಎಂಬುದು, ಏನನ್ನಾದರೂ ನಂಬಲು ಒಂದು ಉತ್ತಮ ಕಾರಣವೇ? ಎಂದು ನಿಮ್ಮನ್ನು ಕೇಳಿಕೊಳ್ಳಿ. ನಾವು ಕಲ್ಪನೆಯ ಒಂದು ಪ್ರಕ್ಷೇಪಣವನ್ನು, ವಿಶೇಷವಾಗಿ ನಮ್ಮ ಬಗೆಗಿರುವುದನ್ನು, ಕೇವಲ "ನಾನು ಹಾಗೆ ಭಾವಿಸುತ್ತೇನೆ" ಎಂಬ ಆಧಾರದ ಮೇಲೆ ನಂಬಿದಾಗ, ನಮಗೆ ಅದರಿಂದ ಅಸುರಕ್ಷಿತವೆನಿಸುವುದು ಏಕೆ? ಏಕೆಂದರೆ ನಮ್ಮ ತಪ್ಪು ನಂಬಿಕೆಗೆ ಯಾವುದೇ ಬೆಂಬಲವಿಲ್ಲ; ಅದು ಸತ್ಯ ಅಥವಾ ಕಾರಣದಿಂದ ಬೆಂಬಲಿತವಾಗಿರುವುದಿಲ್ಲ. 

ವಾಸ್ತವವೆಂದರೆ, ನೋಡುವಾಗ, ಕೇಳುವಾಗ, ವಾಸನೆ ಮತ್ತು ರುಚಿ ನೋಡುವಾಗ, ದೈಹಿಕವಾಗಿ ಏನನ್ನಾದರೂ ಅನುಭವಿಸುವಾಗ ಅಥವಾ ಯೋಚಿಸುವಾಗ ನಾವು ಅನುಭವಿಸಬಹುದಾದ ಸಂತೋಷ, ಅಸಂತೋಷ ಅಥವಾ ನಾವು ಅನುಭವಿಸುವ ಯಾವುದೂ ವಿಶೇಷವಾಗಿರುವುದಿಲ್ಲ. ಅವುಗಳಲ್ಲಿ ಏನನ್ನೂ ಗ್ರಹಿಸಲಾಗುವುದಿಲ್ಲ. ಅವುಗಳನ್ನು ಗ್ರಹಿಸುವುದು ಮೋಡವನ್ನು ಗ್ರಹಿಸುವಂತಿರುತ್ತದೆ - ಸಂಪೂರ್ಣವಾಗಿ ನಿಷ್ಪ್ರಯೋಜಕ. ಜೊತೆಗೆ "ನಾನು" ಮತ್ತು ಯಾವುದೇ ಕ್ಷಣದಲ್ಲಿ ನಾನು ಅನುಭವಿಸುತ್ತಿರುವುದರ ಯಾವುದೂ ವಿಶೇಷವಾಗಿರುವುದಿಲ್ಲ. ನಮ್ಮ ತಲೆಯಲ್ಲಿ ಮಾತನಾಡುವ ಒಂದು ರೀತಿಯ ಸ್ವಯಂಪೂರ್ಣವಾದ ಸ್ಥಿರವಾದ ಅಸ್ತಿತ್ವವಾಗಿ, ತಾನು ಹೇಳಿದ್ದೇ ಆಗಬೇಕೆನ್ನುವಂತೆ ನಾವು ಅಸ್ತಿತ್ವದಲ್ಲಿಲ್ಲ. ನಾವು ಅಸ್ತಿತ್ವದಲ್ಲಿದ್ದೇವೆ, ಆದರೆ "ನಾನು ಹಾಗೆ ಭಾವಿಸುತ್ತೇನೆ", ಅದ್ದರಿಂದ ಹಾಗೆ ನಡೆಯುತ್ತದೆ ಎಂದು ಭಾವಿಸುವ ಮತ್ತು ನಂಬುವ ತಪ್ಪು ಕಲ್ಪನೆಯ ಅಸಾಧ್ಯವಾದ ರೀತಿಯಲ್ಲಿ ಅಲ್ಲ. 

ಈ ತಪ್ಪು ಕಲ್ಪನೆ ಮತ್ತು ನಮ್ಮ ಬಗೆಗಿರುವ ಗೊಂದಲಮಯ ನಂಬಿಕೆಯನ್ನು ನಿವಾರಿಸಲು, ಅವುಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವ ಎದುರಾಳಿ ನಮಗೆ ಬೇಕು. ನಮ್ಮ ಮನಸ್ಸನ್ನು ಶಾಂತಗೊಳಿಸಿ, ಹಾಗೆ ಯೋಚಿಸುವುದನ್ನು ನಿಲ್ಲಿಸುವುದು, ನಮ್ಮ ಗೊಂದಲವನ್ನು ತಾತ್ಕಾಲಿಕವಾಗಿ ನಿಗ್ರಹಿಸಬಹುದು, ಆದರೆ ಅವು ಅದನ್ನು ಮತ್ತೆ ಉದ್ಭವಿಸುವುದರಿಂದ ತಡೆಯುವುದಿಲ್ಲ. ನಮ್ಮ ನಿಜವಾದ ಸಮಸ್ಯೆಗಳ ಈ ನಿಜವಾದ ಕಾರಣದ ನಿಜವಾದ ನಿಲುಗಡೆಯನ್ನು ಸಾಧಿಸಲು ನಿಜವಾದ ಮಾರ್ಗ ಮನಸ್ಸು, ನಮ್ಮ ಅರಿವಿಲ್ಲದಿರುವಿಕೆಗೆ ನೇರವಾಗಿ ವಿರುದ್ಧವಾದ ಮನಸ್ಥಿತಿಯಾಗಿರಬೇಕು. ಅರಿವಿಲ್ಲದಿರುವಿಕೆಗೆ ವಿರುದ್ಧವಾದದ್ದು ಅರಿವು. ಹಾಗಾದರೆ, ನಮಗೆ ಯಾವುದರ ಅರಿವು ಬೇಕು? ನಾವು ಒಂದು ರೀತಿಯ ಸ್ವಯಂ-ಸಂಪೂರ್ಣ ಅಸ್ತಿತ್ವವಾಗಿ ಅಸ್ತಿತ್ವದಲ್ಲಿದ್ದೇವೆ ಎಂಬ ತಪ್ಪು ಕಲ್ಪನೆಯನ್ನು ಅಳಿಸುವುದು, ‘ಅಂತಹದ್ದೇನೂ ಇಲ್ಲ’ ಎಂಬ ಪರಿಕಲ್ಪನೇತರ ಅರಿವು - ಅದರ ಶೂನ್ಯತೆಯ ಪರಿಕಲ್ಪನಾರಹಿತ ಅರಿವು, ಇದು ಶೂನ್ಯತೆಯ ಬಗ್ಗೆ ಹೊಂದಿರುವ ಒಂದು ರೀತಿಯ ಕಲ್ಪನೆ, ಅದು ನಿಖರವೇ ಆಗಿದ್ದರೂ, ಅದರ ಮೂಲಕ ಇರುವ ಪರಿಕಲ್ಪನಾ ಗಮನವಾಗಿರುವುದಿಲ್ಲ. ಕಾರಣ ಮತ್ತು ಕಲ್ಪನೆಯಿಲ್ಲದ ಆಧಾರದ ಮೇಲಿನ ಅರಿವು, ನಾವು ನಿಜವೆಂದು ತಪ್ಪಾಗಿ ನಂಬಿದುದು, ವಾಸ್ತವಕ್ಕೆ ಹೊಂದಿಕೆಯಾಗುವುದಿಲ್ಲ ಎಂಬ ಭಾವನಾತ್ಮಕ ಅನುಭವವು, ಅದು ಅನುರೂಪವಾಗಿದೆ ಎಂಬ ತಪ್ಪು ನಂಬಿಕೆಯನ್ನು ಮತ್ತು ‘ನಾನು ಹಾಗೆ ಹೇಳಿದೆ, ಅದಕ್ಕಾಗಿ ಅದು ನಿಜ’ ಎಂಬ ಸುಳ್ಳು ಸೇರಿದಂತಹ ಅರಿವಿಲ್ಲದಿರುವಿಕೆಯನ್ನು ಅಳಿಸಿಹಾಕುತ್ತದೆ. ಅರಿವಿಲ್ಲದಿರುವಿಕೆಯ ಪ್ರವೃತ್ತಿಗಳು ಮತ್ತು ಅಭ್ಯಾಸಗಳು ಆಳವಾಗಿ ಹುದುಗಿರುವುದರಿಂದ, ಅವುಗಳ ಅಳಿಸುವಿಕೆ ಕ್ರಮೇಣವಾಗಿ, ಭಾಗಗಳಲ್ಲಿ ಮತ್ತು ಹಂತಗಳಲ್ಲಿ ಸಂಭವಿಸುತ್ತದೆ. 

ನಿಜವಾದ ಮಾರ್ಗದ ನಾಲ್ಕು ಅಂಶಗಳು 

ಶೂನ್ಯದ ಪರಿಕಲ್ಪನಾತ್ಮಕವಲ್ಲದ ಅರಿವಿನೊಂದಿಗೆ ಬರುವ ವಿವೇಚನಾತ್ಮಕ ಅರಿವಿನ (ಬುದ್ಧಿವಂತಿಕೆ) ಪರಿಭಾಷೆಯಲ್ಲಿ ನಿಜವಾದ ಮಾರ್ಗವನ್ನು ಅರ್ಥಮಾಡಿಕೊಳ್ಳಬಹುದು ಎಂದು ಬುದ್ಧ ವಿವರಿಸಿದರು. ಈ ಮಾನಸಿಕ ಅಂಶವೇ ಸತ್ಯವನ್ನು ಸುಳ್ಳಿನಿಂದ ವಿವೇಚಿಸುತ್ತದೆ.

  • ಮೊದಲನೆಯದಾಗಿ, ಈ ವಿವೇಚನಾತ್ಮಕ ಅರಿವು ಒಂದು ಮಾರ್ಗ ಮನಸ್ಸಾಗಿದ್ದು, ಇದು ಕ್ರಮೇಣವಾಗಿ ಅರಿವಿಲ್ಲದಿರುವಿಕೆಯ ವಿವಿಧ ಹಂತಗಳ ಅಳಿಸುವಿಕೆ ಮತ್ತು ಸಂಪೂರ್ಣ ನಿಲುಗಡೆಗೆ ಕಾರಣವಾಗುತ್ತದೆ. ಆರಂಭದಲ್ಲಿ, ಇದು ನಮ್ಮ ಪೋಷಕರು ಮತ್ತು ಸಮಾಜವು ನಮ್ಮಲ್ಲಿ ಬೇರೂರಿರುವಂತಹ ವಿಭಿನ್ನ ನಂಬಿಕೆಗಳು ಮತ್ತು ಮೌಲ್ಯಗಳ ವ್ಯವಸ್ಥೆಯನ್ನು ಕಲಿತ ಮತ್ತು ಸ್ವೀಕರಿಸಿದ ಆಧಾರದ ಮೇಲೆ ಇರುವ ಅರಿವಿಲ್ಲದಿರುವಿಕೆ ಮತ್ತು ಗೊಂದಲವನ್ನು ಶಾಶ್ವತವಾಗಿ ನಿವಾರಿಸುತ್ತದೆ. ಇದು ವಾಣಿಜ್ಯ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣಗಳಿಂದ ಪಡೆದವುಗಳನ್ನು ಸಹ ಒಳಗೊಂಡಿರುತ್ತದೆ.

    ಸಾಮಾಜಿಕ ಜಾಲತಾಣಗಳಲ್ಲಿ, ಜನರು ಚೆನ್ನಾಗಿ ಕಾಣುತ್ತಿರುವ ಮತ್ತು ಆಹ್ಲಾದಕರ ಸಮಯದ ಸೆಲ್ಫಿಗಳನ್ನು ನೀವು ನೋಡಿದಾಗ, ಅದು ನೀವು ಹೇಗೆ ಕಾಣಬೇಕು ಮತ್ತು ನಿಮ್ಮ ಜೀವನ ಹೇಗಿರಬೇಕು ಎಂಬ ನಿಮ್ಮ ಕಲ್ಪನೆಯ ಮೇಲೆ ಎಂತಹ ಪರಿಣಾಮ ಬೀರುತ್ತದೆ? ಅದು ನಿಮ್ಮ ಬಗ್ಗೆ ನಿಮ್ಮಲ್ಲಿ ಒಳ್ಳೆಯ ಭಾವನೆಯನ್ನು ಮೂಡಿಸುತ್ತದೆಯೇ ಅಥವಾ ಕೆಟ್ಟ ಭಾವನೆಯನ್ನು ಮೂಡಿಸುತ್ತದೆಯೇ? ಆ ಪೋಸ್ಟ್‌ಗಳು ನಿಜ ಜೀವನವನ್ನು ಪ್ರತಿಬಿಂಬಿಸುವುದಿಲ್ಲ ಎಂಬ ವಿವೇಚನಾತ್ಮಕ ಅರಿವು, ಅವುಗಳು ಪ್ರತಿಬಿಂಬಿಸುವ ತಪ್ಪು ನಂಬಿಕೆಯಿಂದ ಶಾಶ್ವತವಾಗಿ ನಮ್ಮನ್ನು ಮುಕ್ತಗೊಳಿಸುವ ಮಾರ್ಗವಾಗಿದೆ. ಇದರ ಪರಿಣಾಮವಾಗಿ, ನಾವು ಅವರೊಂದಿಗೆ ನಮ್ಮನ್ನು ಹೋಲಿಸಿಕೊಂಡಾಗ ಮತ್ತು ಹಾಗೆ ಇರಲು ಹಾತೊರೆಯುವ ತಪ್ಪು ನಂಬಿಕೆಯು ಸೃಷ್ಟಿಸುವ ಅಸಂತೋಷ ಮತ್ತು ಖಿನ್ನತೆಯಿಂದ ನಮ್ಮನ್ನು ಶಾಶ್ವತವಾಗಿ ಮುಕ್ತಗೊಳಿಸುತ್ತದೆ.

    ಈ ಮೊದಲ ಹೆಜ್ಜೆಯನ್ನು ಮೀರಿ, ನಾವು "ಆರ್ಯ" ಅಥವಾ ಹೆಚ್ಚು ಅರಿತುಕೊಂಡ ಜೀವಿಯಾದಾಗ, ಮತ್ತಷ್ಟು ಪರಿಚಿತತೆಯೊಂದಿಗೆ, ಈ ವಿವೇಚನಾತ್ಮಕ ಅರಿವಿನ ನಂತರದ ಹಂತಗಳಲ್ಲಿ, ನಮ್ಮ ತಲೆಯಲ್ಲಿರುವ ನಿರಂತರ ಧ್ವನಿಯ ಹಿಂದೆ ಇರುವ, ಸ್ಥಿರವಾದ ಅಸ್ತಿತ್ವವಾದ "ನಾನು" ಇದೆ ಎಂದು ಊಹಿಸುವುದರಿಂದ, ಸ್ವಯಂಚಾಲಿತವಾಗಿ ಉದ್ಭವಿಸುವ ಅರಿವಿಲ್ಲದಿರುವಿಕೆಯಿಂದ ನಮ್ಮನ್ನು ಶಾಶ್ವತವಾಗಿ ಮುಕ್ತಗೊಳಿಸುತ್ತೇವೆ. ನಾವು ವಿಮೋಚನೆ ಮತ್ತು ಅಂತಿಮವಾಗಿ ಜ್ಞಾನೋದಯವನ್ನು ಪಡೆಯುತ್ತೇವೆ. ಶೂನ್ಯತೆಯ ವಿವೇಚನಾತ್ಮಕ ಅರಿವು ನಮ್ಮ ನಿಜವಾದ ದುಃಖಗಳ ನಿಜವಾದ ಕಾರಣಗಳಿಂದ ನಮ್ಮನ್ನು ಶಾಶ್ವತವಾಗಿ ಮುಕ್ತಗೊಳಿಸುತ್ತದೆ ಎಂದು ನಾವು ಅರ್ಥಮಾಡಿಕೊಂಡಾಗ, ಅವುಗಳಿಂದ ಮುಕ್ತಿ ಪಡೆಯಲು ಯಾವುದೇ ಮಾರ್ಗವಿಲ್ಲ ಎಂಬ ತಪ್ಪು ಕಲ್ಪನೆಯನ್ನು ಅದು ನಿವಾರಿಸುತ್ತದೆ. 
  • ಎರಡನೆಯದಾಗಿ, "ನಾನು" ಎಂದು ಕರೆಯಲ್ಪಡುವ ಸ್ವಯಂಪೂರ್ಣವಾದ, ಸ್ಥಿರವಾದ ಅಸ್ತಿತ್ವವಿಲ್ಲ ಎಂಬ ವಿವೇಚನಾತ್ಮಕ ಅರಿವು ಅಂತಹ ವಿಷಯವಿದೆ ಎಂಬ ಅರಿವಿಲ್ಲದಿರುವಿಕೆ ಮತ್ತು ತಪ್ಪು ನಂಬಿಕೆಯನ್ನು ಶಾಶ್ವತವಾಗಿ ಅಳಿಸಿಹಾಕುವ ಸೂಕ್ತವಾದ ಸಾಧನವಾಗಿದೆ. ಏಕೆಂದರೆ ಅದು ಇದಕ್ಕೆ ಪರಸ್ಪರ ವಿರುದ್ಧವಾಗಿದೆ. ಅಂತಹ ವಿಷಯವಿದೆ ಮತ್ತು ಅದೇ ಸಮಯದಲ್ಲಿ ಅಂತಹ ವಿಷಯವಿಲ್ಲ ಎಂದು ನೀವು ನಂಬಲು ಸಾಧ್ಯವಿಲ್ಲ, ಅಲ್ಲವೇ? ಈ ವಿವೇಚನಾತ್ಮಕ ಅರಿವು ನಿಜವಾದ ನಿಲುಗಡೆಯನ್ನು ಪಡೆಯಲು ಸೂಕ್ತವಲ್ಲದ ಸಾಧನವಾಗಿದೆ ಎಂಬ ತಪ್ಪು ಕಲ್ಪನೆಯನ್ನು ಈ ಅಂಶವು ನಿವಾರಿಸುತ್ತದೆ. 
  • ಮೂರನೆಯದಾಗಿ, ಶೂನ್ಯತೆಯ ವಿವೇಚನಾತ್ಮಕ ಅರಿವು ಹಂತಗಳಲ್ಲಿ ಆರ್ಯ, ವಿಮೋಚನೆಗೊಂಡ ಜೀವಿ ಮತ್ತು ಪ್ರಬುದ್ಧ ಬುದ್ಧನಾಗುವ ಸಾಧನೆಗಳನ್ನು ವಾಸ್ತವಿಕಗೊಳಿಸುವ ಸಾಧನವಾಗಿರುತ್ತದೆ. ಏಕಾಗ್ರತೆಯ ಆಳವಾದ ಸ್ಥಿತಿಗಳಲ್ಲಿ ಒಂದನ್ನು ಸಾಧಿಸುವುದು, ಈ ಸಾಧನೆಗಳನ್ನು ವಾಸ್ತವಿಕಗೊಳಿಸುವ ಸಾಧನವಾಗಿದೆ ಎಂಬ ತಪ್ಪು ನಂಬಿಕೆಯನ್ನು ಇದು ವಿರೋಧಿಸುತ್ತದೆ. 
  • ಕೊನೆಯದಾಗಿ, ಈ ವಿವೇಚನಾತ್ಮಕ ಅರಿವು ನಮ್ಮ ವಿಮೋಚನೆ ಮತ್ತು ಜ್ಞಾನೋದಯವನ್ನು ತಡೆಯುವ ಗೊಂದಲಮಯ ಭಾವನೆಗಳು ಮತ್ತು ಅವುಗಳ ಪ್ರವೃತ್ತಿಗಳು ಮತ್ತು ಅಭ್ಯಾಸಗಳನ್ನು ಶಾಶ್ವತವಾಗಿ ತೆಗೆದುಹಾಕುವ ಸಾಧನವಾಗಿದೆ. ಇವು ನಮ್ಮ ಮನಸ್ಸಿನ ಸ್ವಭಾವದ ಭಾಗಗಳಾಗಿವೆ ಮತ್ತು ಅವುಗಳನ್ನು ಎಂದಿಗೂ ಸಂಪೂರ್ಣವಾಗಿ ತೆಗೆದುಹಾಕಲಾಗುವುದಿಲ್ಲ ಎಂಬ ತಪ್ಪು ಕಲ್ಪನೆಯನ್ನು ಇದು ವಿರೋಧಿಸುತ್ತದೆ. 

ಸಾರಾಂಶ 

ವಿವೇಚನಾತ್ಮಕ ಅರಿವಿನೊಂದಿಗೆ ಖಚಿತಪಡಿಸಿಕೊಳ್ಳಲಾದ ಶೂನ್ಯತೆಯ ಪರಿಕಲ್ಪನಾತ್ಮಕವಲ್ಲದ ಅರಿವಿನ ನಿಜವಾದ ಮಾರ್ಗ ಮನಸ್ಸು, ನಮ್ಮ ನಿಜವಾದ ದುಃಖಗಳ ನಿಜವಾದ ಕಾರಣಗಳನ್ನು ಅಳಿಸಿಹಾಕುವ ಎದುರಾಳಿಯಾಗಿದೆ. ಒಮ್ಮೆ ಸಾಧಿಸಿದ ನಂತರ, ಈ ನಿಜವಾದ ಮಾರ್ಗ ಮನಸ್ಸು, ಹಂತ-ಹಂತವಾಗಿ, ಜೀವನದ ನಂತರ ಜೀವನದಲ್ಲಿ ಅನಿಯಂತ್ರಿತವಾಗಿ ಪುನರಾವರ್ತಿತ ನಿಜವಾದ ದುಃಖಗಳನ್ನು ಶಾಶ್ವತಗೊಳಿಸುವುದರ ನಿಜವಾದ ಕಾರಣಗಳಾದ ಅರಿವಿಲ್ಲದಿರುವಿಕೆ ಮತ್ತು ತಪ್ಪು ನಂಬಿಕೆಗಳನ್ನು ಶಾಶ್ವತವಾಗಿ ನಮ್ಮಿಂದ ನಿವಾರಿಸುತ್ತದೆ. ಅಂತಹ ಮನಸ್ಸನ್ನು ಸಾಧಿಸುವುದು ನಾವು ಶ್ರಮಿಸಬಹುದಾದ ಅತ್ಯಂತ ಯೋಗ್ಯವಾದ ವಿಷಯವಲ್ಲವೇ?

Top